Monday, October 18, 2010

PSI ನೇಮಕಾತಿ ಪರೀಕ್ಷೆ - 2009

ನಮ್ಮನ್ನು ಜೀವಂತವಾಗಿರಿಸಿರುವ ಆಮ್ಲಜನಕವು ದ್ಯುತಿ ಸಂಶ್ಲೇಷಣಾ ಕ್ರಿಯೆಯಿಂದ ಉತ್ಪತ್ತಿಯಾಗುತ್ತದೆ.  ಇದು ಬರುವುದು
ಎ) ಇಂಗಾಲದ ಡೈ ಆಕ್ಸೈಡ್ ನಿಂದ,  ಬಿ) ಮಣ್ಣಿನಿಂದ ತೆಗೆಯಲ್ಪಟ್ಟ ಇಂಗಾಲದಿಂದ,  ಸಿ) ಖನಿಜದ ಆಕ್ಸೈಡ್ ನಿಂದ,  ಡಿ) ನೀರಿನಿಂದ

ಸಾಮಾನ್ಯ ಬಳಕೆಯ ಸಾಂಬಾರ ವಸ್ತು ಲವಂಗವು ದೊರೆಯುವುದು
ಎ) ಬೇರಿನಿಂದ,  ಬಿ) ಕಾಂಡದಿಂದ,  ಸಿ) ಮೊಗ್ಗಿನಿಂದ,  ಡಿ) ಹಣ್ಣಿನಿಂದ

14 ವರ್ಷದೊಳಗಿನ ಮಕ್ಕಳ ಬೆಳವಣಿಗೆಗೆ ಕೆಳಗಿನವುಗಳಲ್ಲಿ ಅಗತ್ಯವಾಗಿರುವುದು
ಎ) ಸಸಾರಜನಕ,  ಬಿ) ಜೀವಸತ್ವ,  ಸಿ) ಕೊಬ್ಬು,  ಡಿ) ಹಾಲು, 

ಹೃದಯಘಾತವಾದ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಪ್ರಥಮ ಚಿಕಿತ್ಸೆ
ಎ) ಬಾಯಿಯಿಂದ ಬಾಯಿಯ ಉಸಿರಾಟ,  ಬಿ) ಎದೆನೀವುವುದು,  ಸಿ) ವೈದ್ಯರನ್ನು ಕರೆಯುವುದು,  ಡಿ) ಇಂಜೆಕ್ಷನ್ ಕೊಡುವುದು

ಸಮುದ್ರ ನೀರಿನಿಂದ ಸ್ವಚ್ಛನೀರನ್ನು ಈ ಕ್ರಮದಿಂದ ಪಡೆಯಬಹುದು
ಎ) ಸೋಸುವಿಕೆ,  ಬಿ) ಭಟ್ಟಿಇಳಿಸುವಿಕೆ,  ಸಿ) ಆವಿಯಾಗುವಿಕೆ,  ಡಿ) ಭಾಗಶ: ಭಟ್ಟಿಇಳಿಸುವಿಕೆ

ಅಡುಗೆ ಸೋಡಾದ ರಾಸಾಯನಿಕ ಹೆಸರು
ಎ) ಕ್ಯಾಲ್ಶಿಯಂ ಫಾಸ್ಫೇಟ್,  ಬಿ) ಸೋಡಿಯಂ ಬೈ ಕಾರ್ಬೊನೇಟ್,  ಸಿ) ಸೋಡಿಯಂ ಕ್ಲೋರೈಡ್,  ಡಿ) ಬೇಕರ್ಸ್ ಈಸ್ಟ್

ಅಡುಗೆ ಅನಿಲ ವಿತರಕರು ವಿತರಿಸುವ ಸಿಲಿಂಡರಿನ ಅನಿಲದ ಸ್ವರೂಪ
ಎ) ದ್ರವ,  ಬಿ) ಅನಿಲ,  ಸಿ) ಘನ,  ಡಿ) ದ್ರಾವಣ

ಶರೀರದ ಭಾರವು
ಎ) ಭೂಮಿಯ ಎಲ್ಲಾ ಪ್ರದೇಶದಲ್ಲೂ ಒಂದೇ ಸಮನಾಗಿರುತ್ತದೆ,  ಬಿ) ದೃವಗಳಲ್ಲಿ ಹೆಚ್ಚಾಗಿರುತ್ತದೆ,  ಸಿ) ಭೂಮಧ್ಯ ರೇಖೆಯಲ್ಲಿ ಹೆಚ್ಚಾಗಿರುತ್ತದೆ,  ಡಿ)  ಸಮತಟ್ಟು ಪ್ರದೇಶಕ್ಕಿಂತ ಬೆಟ್ಟದ ಪ್ರದೇಶದಲ್ಲಿ ಹೆಚ್ಚಾಗಿರುತ್ತದೆ

ವಾಯು ಒತ್ತಡವನ್ನು ಅಳೆಯುವುದು
ಎ) ಹೈಡ್ರೋಮೀಟರ್,  ಬಿ) ಬ್ಯಾರೋಮೀಟರ್,  ಸಿ) ಹೈಗ್ರೋಮೀಟರ್,  ಡಿ) ಆಲ್ಟೀ ಮೀಟರ್

ಮೂರು ಪ್ರಾಥಮಿಕ ಬಣ್ನಗಳೆಂದರೆ
ಎ) ನೀಲಿ, ಹಸಿರು, ಕೆಂಪು,  ಬಿ) ನೀಲಿ ಹಳದಿ, ಕೆಂಪು,  ಸಿ) ಹಳದಿ, ಕಿತ್ತಳೆ,  ಕೆಂಪು,  ಡಿ) ನೇರಳೆ, ಬೂದು,  ನೀಲಿ

ಜಾವಾ ಮತ್ತು ಸುಮಾತ್ರ ಪ್ರದೇಶಗಳನ್ನು ಗೆದ್ದುಕೊಂಡ ಭಾರತವನ್ನಾಳಿದ ರಾಜನು ಯಾರು
ಎ) ರಾಜ ರಾಜ ಚೋಳ-1,  ಬಿ) ರಾಜೇಂದ್ರ ಚೋಳ-2,  ಸಿ) ಸಮುದ್ರ ಗುಪ್ತ,  ಡಿ) ವಿಕ್ರಮಾದಿತ್ಯ

ಹೊಯ್ಸಳ ರಾಜ್ಯವನ್ನು ಅಂತಿಮವಾಗಿ ವಶಪಡಿಸಿಕೊಂಡವರು ಯಾರು
ಎ) ಬಹಮನಿ ಸುಲ್ತಾನರು,  ಬಿ) ವಿಜಯನಗರ,  ಸಿ) ಪ್ರತಿಹಾರರು,  ಡಿ) ಪಲ್ಲವರು

1857ರ ದಂಗೆಯ ಸಂದರ್ಭದಲ್ಲಿ ಸ್ನೇಹಿತನ ಕುತಂತ್ರದಿಂದ ಬ್ರಿಟೀಷರಿಗೆ ಬಲಿಯಾದವರು
ಎ) ನಾನಾ ಸಾಹೇಬ್,  ಬಿ) ಕುನ್ವರ್ ಸಿಂಗ್,  ಸಿ) ಖಾನ್ ಬಹದ್ದೂರ್ ಖಾನ್,  ಡಿ) ತಾಂತ್ಯಾ ಟೋಪಿ

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಪ್ರಥಮ ಮಹಿಳಾ ಅಧ್ಯಕ್ಷೆ
ಎ) ಕಸ್ತೂರಿಬಾ ಗಾಂಧಿ,  ಬಿ) ಆನಿಬೆಸೆಂಟ್,  ಸಿ) ಸರೋಜಿನಿ ನಾಯ್ಡು,  ಡಿ) ವಿಜಯಲಕ್ಷ್ಮಿ ಪಂಡಿತ್

1920ರಲ್ಲಿ ಅಸಹಕಾರ ಚಳುವಳಿಯನ್ನು ಹಿಂದೆ ಪಡೆದಿದ್ದು
ಎ) ಗಾಂಧೀಜಿಯವರ ಅನಾರೋಗ್ಯದ ಕಾರಣಕ್ಕೆ,  ಬಿ) ಇಂಡಿಯನ್ ನ್ಯಾಷನಲ್ ಕ್ರಾಂಗ್ರೆಸ್ ಅತಿರೇಕದ ಕಾರ್ಯನೀತಿಯನ್ನು ಅಳವಡಿಸಿಕೊಂಡಿದ್ದಕ್ಕೆ,  ಸಿ) ಸರ್ಕಾರದ ಉದ್ರಿಕ್ತ ಅಪೀಲಿನಿಂದ,  ಡಿ) ಚೌರಿಚೌರದಲ್ಲಿ ಭುಗಿಲೆದ್ದ ಹಿಂಸೆಯಿಂದಾಗಿ

1857ರ ಭಾರತದ ಪ್ರಪ್ರಥಮ ಸ್ವತಂತ್ರ ಹೋರಾಟದಲ್ಲಿ ಪ್ರಪ್ರಥಮ ಬಾರಿಗೆ ಗುಂಡು ಹಾರಿಸಿದ ಮುಖಂಡ
ಎ) ರಾಣಿ ಲಕ್ಷ್ಮಿಬಾಯಿ,  ಬಿ) ಭಕ್ತ್ ಖಾನ್,  ಸಿ) ಮಂಗಲ್ ಪಾಂಡೆ,  ಡಿ) ಶಿವಾಜಿ

ಭಾರತದ ಗ್ರಾಂಡ್ ಓಲ್ಡ್ ಮ್ಯಾನ್ ಆಫ್ ಇಂಡಿಯಾ ಎಂದು ಗುರುತಿಸಲ್ಪಟ್ಟವರು
ಎ) ಖಾನ್ ಅಬ್ದುಲ್ ಗಫರ್ ಖಾನ್,  ಬಿ) ರಾಜಗೋಪಾಲ ಚಾರಿ,  ಸಿ) ಲಾಲಾ ಲಜಪತರಾಯ್,  ಡಿ) ದಾದಾಬಾಯಿ ನವರೋಜಿ

ಡಬ್ಲ್ಯೂ.ಜಿ.ಗ್ರೇಸ್ ಅವರು ಭಾಗವಹಿಸಿರುವ ಕ್ರೀಡೆ
ಎ) ಹಾಕಿ,  ಬಿ) ಬಿಲಿಯರ್ಡ್ಸ್,   ಸಿ) ಕ್ರಿಕೇಟ್,  ಡಿ) ಗಾಲ್ಫ್

1854ರ ಸ್ ಚಾರ್ಲ್ಸ್ ವುಡ್ಸ್ ನಿರ್ಗಮನ ಪ್ರಮುಖವಾಗಿ ಸಂಬಂಧಿಸಿದ್ದು
ಎ) ಆಡಳಿತಾತ್ಮಕ ಸುಧಾರಣೆಗಳು,  ಬಿ) ಸಾಮಾಜಿಕ ಸುಧಾರಣೆಗಳು,  ಸಿ) ಆರ್ಥಿಕ ಸುಧಾರಣೆಗಳು,  ಡಿ) ಶೈಕ್ಷಣಿಕ ಸುಧಾರಣೆಗಳು

1893ರಲ್ಲಿ ಮಹಾರಾಷ್ಟ್ರದ ಯುವಜನತೆಯಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಸಾಂಪ್ರದಾಯಿಕವಾದ ಗಣಪತಿ ಹಬ್ಬವನ್ನು ಆಚರಿಸಲು ಈತ ಆರಂಭಿಸಿದ್ದು ----  ಈ ವಾಕ್ಯಕ್ಕೆ ಸಂಬಂಧಿಸಿದ್ದು ಯಾರು
ಎ) ವಿಷ್ಣು ಶಾಸ್ತ್ರಿ ಚೆಂಪ್ಲುಕರ್,  ಬಿ) ವಿ.ಡಿ.ಸಾವರ್ಕರ್,  ಸಿ) ಗೋಪಾಲ ಕೃಷ್ಣಗೋಖಲೆ,  ಡಿ) ಬಾಲಗಂಗಾಧರ ತಿಲಕರು

ರಾಜ್ಯಪಾಲರ ಆಜ್ಞೆಯ ಪರಮಾವಧಿ
ಎ) ಒಂದು ವರ್ಷ,  ಬಿ) ಮೂರು ತಿಂಗಳು,  ಸಿ) ಆರು ತಿಂಗಳು,  ಡಿ) ದೀರ್ಘಾವಧಿ

ಸದಸ್ಯನಲ್ಲದ ವ್ಯಕ್ತಿಯಾಗಿ ಸಂಸತ್ತಿನ ಕಲಾಪದಲ್ಲಿ ಯಾರು ಭಾಗವಹಿಸಬಹುದು
ಎ) ಉಪಾಧ್ಯಕ್ಷ,  ಬಿ) ಮುಖ್ಯ ನ್ಯಾಯಾಧೀಶ,  ಸಿ) ಅಟಾರ್ನಿಜನರಲ್,  ಡಿ) ಮುಖ್ಯ ಚುನಾವಣಾ ಆಯುಕ್ತ

ಯುದ್ಧ ಅಥವಾ ಶಾಂತಿಯ ಆದೇಶವನ್ನು ಕಾನೂನಿನಲ್ಲಿ ಯಾರು ಹೊರಡಿಸಬಹುದು
ಎ) ಭೂಸೈನ್ಯದ, ನೌಕಾಪಡೆಯ ಹಾಗೂ ವಾಯುಸೇನೆಗಳ ಮುಖ್ಯಸ್ಥರು,  ಬಿ) ಭಾರತದ ಪ್ರಧಾನ ಮಂತ್ರಿಗಳು,  ಸಿ) ಭಾರತದ ರಾಷ್ಟ್ರಪತಿ,  ಡಿ) ರಕ್ಷಣಾಸಚಿವರು

ವ್ಯಕ್ತಿಸ್ವಾತಂತ್ರದ ಬಹುದೊಡ್ಡ ಚಿನ್ಹೆ
ಎ) ಆಜ್ಞಾಪತ್ರ,  ಬಿ) ಸರ್ಟಿಯೋರರಿ,  ಸಿ) ಕೋ ವಾರೆಂಟೋ,  ಡಿ) ಹೇಬಿಯಸ್ ಕಾರ್ಪಸ್

ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು 1956ರಲ್ಲಿ ಬಲವಂತ್ರಯ್ ಜಿ ಮೆಹ್ತಾ ತಂಡವನ್ನು ಆರಂಭಿಸಿದ ಕಾರಣ
ಎ) ಅಂದಿನ ಜಿಲ್ಲಾ ಪಂಚಾಯ್ತಿಯ ಕಾರ್ಯಕ್ರಮಗಳನ್ನು ವರದಿ ಮಾಡಲು,  ಬಿ) ಹೊಸ ಜಿಲ್ಲಾ ಪಂಚಾಯ್ತಿ ವ್ಯವಸ್ಥೆಯ ಸ್ಥಾಪಿಸಲು ಇರುವ ಸಾದ್ಯತೆಗಳ ಬಗ್ಗೆ ಪರಿಶೀಲನೆ,  ಸಿ) ಪ್ರಜಾಪ್ರಭುತ್ವದ ವಿಕೇಂದ್ರಿಕರಣಕ್ಕೆ ಸಲಹೆ ನೀಡಲು,  ಡಿ) ಸಾಮಾಜಿಕ ಅಭಿವೃದ್ಧಿ
ಯೋಜನೆಗಳ ಉತ್ತಮ ರೀತಿಯ ಅನುಷ್ಠಾನಕ್ಕೆ ಬೇಕಾದ ಸಲಹೆ ನೀಡಲು

ಬಿರ್ಸಾಮುಂಡಾರವರು ಬುಡಕಟ್ಟು ಜನಾಂಗದ ಹೋರಾಟದಲ್ಲಿ ಪಾಲುಗೊಂಡಿದ್ದ  ಪ್ರದೇಶ
ಎ) ಈಶಾನ್ಯ ಪ್ರದೇಶ,  ಬಿ) ಜಾರ್ಖಂಡ್,  ಸಿ) ನಗರ ವಿಭಾಗ,  ಡಿ) ಡೆಕ್ಕನ್

ಮಹಿಳಾ ರಾಷ್ಟ್ರೀಯ ಆಯೋಗ ರಚನೆಯಾದದ್ದು
ಎ) ಸಂವಿಧಾನದಲ್ಲಿ ಮಾಡಿದ ಬದಲಾವಣೆಯಿಂದ,  ಬಿ) ಸಚಿವ ಸಂಪುಟದ ನಿರ್ಣಯದಿಂದ,  ಸಿ) ಸಂಸತ್ತಿನ ನಿಬಂಧನೆಯಿಂದ,  ಡಿ) ಭಾರತದ ಅಧ್ಯಕ್ಷರ ಆಜ್ಞೆಯಿಂದ

ಕೆಳಗಿನ ಪ್ರಧನಮಂತ್ರಿಗಳಲ್ಲಿ ಯಾರು ಅಲ್ಪಸಂಖ್ಯಾತರ ಮುಖ್ಯಸ್ಥರಾಗಿರಲಿಲ್ಲ
ಎ) ಐ.ಕೆ.ಗುಜ್ರಾಲ್,  ಬಿ) ವಿ.ಪಿ.ಸಿಂಗ್,  ಸಿ) ಚಂದ್ರಶೇಖರ್,  ಡಿ) ಮುರಾರ್ಜಿ ದೇಸಾಯಿ

ಕೆಳಕಂಡ ವ್ಯಕ್ತಿಗಳಲ್ಲಿ ಭಾರತದಲ್ಲಿನ ಸ್ಥಳೀಯ ಸ್ವಯಂ-ಸರ್ಕಾರವನ್ನು ಪರಿಚಯಿಸಿದವರು ಯಾರು
ಎ) ಲಾರ್ಡ್ ಮೌಂಟ್ ಬ್ಯಾಟನ್,  ಬಿ) ಲಾರ್ಡ್ ರಿಪ್ಪನ್,  ಸಿ) ಲಾರ್ಡ್ ಕ್ಯಾನಿಂಗ್,  ಡಿ) ಲಾರ್ಡ್ ಮೆಕಾಲೆ

ಭಾರತದ ಪ್ರಜೆಯಾಗಲು ಕೆಳಗಿನವುಗಳನ್ನು ಯಾವ ನಿಯಮ ಅನ್ವಯಿಸುವುದಿಲ್ಲ
ಎ) ಜನನ,  ಬಿ) ಸಂತತಿ,  ಸಿ) ಆಸ್ತಿಗಳಿಕೆ,  ಡಿ) ಪರಕೀಯರಿಗೆ ಪ್ರಜಾಹಕ್ಕುಗಳನ್ನು ಕೊಡುವುದು

ಗಾಂಧೀಜಿಯವರು ಯಾರ ಕಾನ್ಸೆನ್ಸ್ ಕೀಪರ್ ಎಂದು ಪರಿಗಣಿಸಲ್ಪಟ್ಟವರು
ಎ) ಸಿ.ರಾಜಗೋಪಾಲ ಚಾರಿ,  ಬಿ) ಆರ್.ಟ್ಯಾಗೂರ್,  ಸಿ) ವಿ.ಪಾಟೇಲ್,  ಡಿ) ಜಿ.ಕೆ.ಗೋಖಲೆ

ಕ್ವಿಟ್ ಇಂಡಿಯಾ ಚಳುವಳಿಯನ್ನು ನ್ಯಾಷನಲ್ ಕಾಂಗ್ರೆಸ್ ಆರಂಭಿಸಿದ್ದು ಯಾವ ವೈಫಲ್ಯದ ನಂತರ
ಎ) ಕ್ರಿಪ್ಸ್ ಮಿಷನ್,  ಬಿ) ಲಾರ್ಡ್ ವೇವಲ್ ರ ಸಿಮ್ಲಾ ಸಭೆ ನಡೆದ ಸಂದರ್ಭ,  ಸಿ) ಕ್ಯಾಬಿನೆಟ್ ಮಿಷನ್,  ಡಿ) ಯಾವುದು ಅಲ್ಲ

ಗಾಂದೀಜಿಯವರ ರಾಮರಾಜ್ಯದ ಎರಡು ನಿಯಮಗಳು
ಎ) ಸತ್ಯ ಮತ್ತು ಅಹಿಂಸೆ,  ಬಿ) ನ್ಯಾಯ ಮಾರ್ಗ ಮತ್ತು ಉತ್ತಮ ಗುರಿ,  ಸಿ) ಖಾದಿ ಮತ್ತು ಅಹಿಂಸೆ,  ಡಿ) ಪ್ರಜಾಪ್ರಭುತ್ವ ಮತ್ತು
ಸಮಾಜವಾದ

ಮಹದೇವ ಗೋವಿಂದ ರಾನಡೆಯವರು ಸದಸ್ಯರಾಗಿದ್ದುದು
ಎ) ಆರ್ಯ ಸಮಾಜ,  ಬಿ) ಪ್ರಾರ್ಥನಾ ಸಮಾಜ,  ಸಿ) ಇಂಡಿಯಾ ಲೀಗ್,  ಡಿ) ಥಿಯಾಸಫಿಕಲ್ ಸೊಸೈಟಿ

ವೃತ್ತಿಪರ ನಾಗರೀಕ ಅವಿಧೇಯತಾ ಚಳುವಳಿ ಆರಂಭಗೊಂಡದ್ದು
ಎ) 1942,  ಬಿ) 1940,  ಸಿ) 1945,  ಡಿ) 1947

ವಲ್ಲಭಬಾಯಿ ಪಟೇಲರಿಗೆ ಸರ್ದಾರ್ ಬಿರುದು ನೀಡಿದ್ದು ಯಾರು
ಎ) ಸಿ.ರಾಜಗೋಪಾಲ ಚಾರಿ,  ಬಿ) ಎಂ.ಕೆ.ಗಾಂಧಿ,  ಸಿ) ಜೆ.ಎಲ್.ನೆಹರು,  ಡಿ) ಎಂ.ಎ.ಜಿನ್ನಾ

ಈ ಪ್ರಭಲ ಹಿಂದುಸ್ತಾನಿ ಗಾಯಕರು ಶ್ರೀ. ಅಲ್ಲಾಡಿಯ ಖಾನ್ ಅವರ ಶಿಷ್ಯರು
ಎ) ಗಂಗೂಬಾಯಿ ಹಾನಗಲ್,  ಬಿ) ಮಲ್ಲಿಕಾರ್ಜುನ ಮನ್ಸೂರ್,  ಸಿ) ಬಸವರಾಜ ರಾಜಗುರು,  ಡಿ) ಪಂಡಿತ್ ಭೀಮಸೇನ ಜೋಷಿ

ಭಾರತದಲ್ಲಿ ಬ್ರಿಟೀಷರ ಕೊನೆಯ ಎರಡು ವರ್ಷಗಳಲ್ಲಿ ಅನೇಕ ಚಳುಗಳಿಗಳು ಜರುಗಿದವು ಇದಕ್ಕೆ ಸೇರದಿರುವುದು
ಎ) ತಿರುವನಂತಪುರದ ಪುನ್ನಪ್ರ ವಯಲಾರ್,  ಬಿ) ಬಂಗಾಳದ ತೆಂಗ,  ಸಿ) ಹೈದರಾಬಾದಿನ ತೆಲಂಗಾಣ ಚಳುವಳಿ,  ಡಿ) ಅವಧ್ ನಲ್ಲಿನ ಏಕಾ ಚಳುವಳಿ

ಭಾರತದಲ್ಲಿ ಸ್ವದೇಶಿ ಚಳುವಳಿ ಆರಂಭಗೊಂಡಿದ್ದು
ಎ) ಗಾಂಧೀಜಿಯವರ ಚಂಪಾರಣ್ ಸತ್ಯಾಗ್ರಹ,  ಬಿ) ಬಂಗಾಳದ ವಿಭಜನೆಯ ವಿರುದ್ಧದ ಚಳುವಳಿ,  ಸಿ) ರೌಲತ್ ಆಕ್ಟ್ ವಿರುದ್ಧ ಪ್ರತಿಭಟನೆ,  ಡಿ) 1919-22 ರ ಮೊದಲ ಅಸಹಕಾರ ಚಳುವಳಿ

ಅವರಿಗಿಂತ ಹೆಚ್ಚಾಗಿ ನನಗೆ ಸೋಲಾದದ್ದು  ಗಾಂಧಿಯವರು ಈ ಹೇಳಿಕೆ ನೀಡಿದ್ದು ಯಾರಿಗೆ
ಎ) ಸಿ.ಆರ್.ದಾಸ್,  ಬಿ) ಸರ್ದಾರ್ ವಲ್ಲಭ ಭಾಯಿ ಪಟೇಲ್,  ಸಿ) ಪಟ್ಟಾಭಿ ಸೀತಾರಾಮಯ್ಯ,  ಡಿ) ಸಿ. ರಾಜಗೋಪಾಲ ಚಾರಿ

ಭೂಮಿಯಿಂದ ನಕ್ಷತ್ರಗಳಿಗಿರುವ ದೂರವನ್ನು ಅಳೆಯುವ ಪ್ರಮಾಣ
ಎ) ಜ್ಯೋತಿವರ್ಷ,  ಬಿ) ಮಾರು,  ಸಿ) ಸಮುದ್ರಯಾನದ ಮೈಲಿಗಳು,  ಡಿ) ಕಿಲೋ ಮೀಟರ್ಗಳು

1, 4, 9, 16, 25 ______ ?
ಎ) 36,  ಬಿ) 30,  ಸಿ) 35,  ಡಿ) 40

ಸುರುಳಿಯಾಕಾರದ ಸಮುದ್ರದ ಅಲೆಗಳು ಏಳುವುದು ಯಾವ ದಿನಗಳಲ್ಲಿ
ಎ) ಅಮಾವಾಸ್ಯೆಯಂದು,  ಬಿ) ಶುಕ್ಲಪಕ್ಷದ ಮೊದಲ ವಾರ,  ಸಿ) ಶೂಕ್ಲ ಪಕ್ಷದ ಮೂರನೆ ವಾರ,  ಡಿ) ಹುಣ್ಣಿಮೆಯಂದು

ಅಲ್ಟ್ರಾವೈಲೆಟ್ ಕಿರಣಗಳನ್ನು ಹೀರಿಕೊಳ್ಳುವ ವಾತಾವರಣದಲ್ಲಿನ ಅನಿಲ ಯಾವುದು
ಎ) ಮೀಥೇನ್,  ಬಿ) ನೈಟ್ರೋಜನ್,  ಸಿ) ಓಝೋನ್,  ಡಿ) ಹೀಲಿಯಂ

ಪದರುಗಲ್ಲುಗಳನ್ನು ಗುರುತಿಸಿ
1) ಬಸಾಲ್ಟ್,  2) ಸುಣ್ಣದ ಕಲ್ಲು,  3) ಷೇಲ್,  4) ಗ್ರಾನೈಟ್,  5) ಕ್ವಾರ್ಟ್ಸ್
ಎ) 1ಹಾಗೂ2,  ಬಿ) 2ಹಾಗೂ3,  ಸಿ) 2ಹಾಗೂ5,  ಡಿ) 3ಹಾಗೂ4

ತೇವಾಂಶ ಅಳೆಯಲು ಬಳಸುವ ಸಾಧನ
ಎ) ಬಾರೋ ಮೀಟರ್,  ಬಿ) ಥರ್ಮಾ ಮೀಟರ್,  ಸಿ) ಹೈಗ್ರೋ ಮೀಟರ್,  ಡಿ) ಹೈಡ್ರೋಮೀಟರ್

ಪ್ರಪಂಚದ ಅತಿ ದೊಡ್ಡ ಮೀನು ಉತ್ಪಾದಕ ರಾಷ್ಟ್ರ
ಎ) ಚೀನ,  ಬಿ) ರಷ್ಯ,  ಸಿ) ಜಪಾನ್,  ಡಿ) ನಾರ್ವೆ

ರೇಬಿಸ್ ನಿಂದ ತೊಂದರೆಗೊಳಗಾಗುವುದು
ಎ) ಮೇಕೆ,  ಬಿ) ದನಗಳು,  ಸಿ) ಕೋಳಿಗಳು,  ಡಿ) ಎಲ್ಲಾ ಪ್ರಾಣಿಗಳು

ತೆಂಗಿನ ಅತಿ ದೊಡ್ಡ ಉತ್ಪಾದಕ ರಾಜ್ಯ ಯಾವುದು
ಎ) ಅಸ್ಸಾಂ,  ಬಿ) ಕೇರಳ,  ಸಿ) ತಮಿಳುನಾಡು,  ಡಿ) ಕರ್ನಾಟಕ

ಕುಂದ ಜಲವಿದ್ಯುತ್ ಯೋಜನೆ ಅನುಷ್ಟಾನ ಗೊಳಿಸಿರುವ ರಾಜ್ಯ ಯಾವುದು
ಎ) ಪಶ್ಚಿಮ ಬಂಗಾಳ,  ಬಿ) ಒರಿಸ್ಸಾ,  ಸಿ) ಕರ್ನಾಟಕ,  ಡಿ) ತಮಿಳುನಾಡು

ವಿಚಾರ ಸರಣಿಯಲ್ಲಿ ಹಣದುಬ್ಬರವೆಂದರೆ
ಎ) ಅಗತ್ಯ ವಸ್ತುಗಳ ಬೆಲೆ ಅದಾಯಕ್ಕಿಂತ ಹೆಚ್ಚಾದಾಗ,  ಬಿ) ಜಿ.ಡಿ.ಪಿ.ಗಿಂತ ಹಣದ ಸರಬರಾಜು ಹೆಚ್ಚಾದಾಗ,  ಸಿ) ಹಣ ವಿನಿಮಯದಲ್ಲಿ ರುಪಾಯಿ ಮೌಲ್ಯ ಕುಸಿದಾಗ,  ಡಿ) ರಾಜ್ಯಾದಾಯ ಕೊರತೆ ನಿಶ್ಚಿತ ಸಂದಾಯದ ಕೊರತೆಗಿಂತ ಹೆಚ್ಚಾದಾಗ

ಒಂದು ಸಂಸ್ಥೆಯು ಅಸ್ವಸ್ಥಗೊಂಡಿದೆಯೆಂದು ಹೇಳಲು, ಆರ್ಥಿಕ ವರ್ಷದ ಕೊನೆಯಲ್ಲಿ ಕ್ರೂಢಿಕರಿಸಿದ ನಷ್ಟದ ಪ್ರಮಾಣವು ಮೂಲ ಬಂಡವಾಳದ ಶೆ. _______ ಕ್ಕಿಂತ ಕಡಿಮೆಯಿದ್ದರೆ
ಎ) 100,  ಬಿ) 75,  ಸಿ) 50,  ಡಿ) 25

ಉದ್ಯಮದ ಅಸ್ವಸ್ಥತೆಗೆ ಕಾರಣವಾಗುವ ಆಂತರಿಕ ಕಾರಣ ಇದಲ್ಲ
ಎ) ಅವ್ಯವಸ್ಥೆ,  ಬಿ) ವಿದ್ಯುತ್ ಕಡಿತ,  ಸಿ) ತಪ್ಪಾದ ಡಿವಿಡೆಂಡ್ ಪಾಲಿಸಿ,  ಡಿ) ಬಂಡವಾಳದ ವಿಂಗಡಣೆ

ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಕಂದಾಯದ ಅದಾಯ ಬರುವುದು
ಎ) ಅದಾಯ ತೆರಿಗೆ,  ಬಿ) ಎಜುಕೇಷನ್ ಸೆಸ್,  ಸಿ) ಕೇಂದ್ರ ಸುಂಕ ತೆರಿಗೆ,  ಡಿ) ಆಯಾತ ಸುಂಕ

ನ್ಯಾಷನಲ್ ಸೆಕ್ಯುರಿಟೀಸ್ ಡೆಪೋಸಿಟರಿ ಲಿಮಿಟೆಡ್ (ಎನ್.ಎಸ್.ಡಿ.ಎಲ್) ವ್ಯವಹಾರ ನೆಡೆಸುವುದು
ಎ) ಬೇರರ್ ಬಾಂಡ್,  ಬಿ) ಜಿ.ಡಿ.ಆರ್.ಗಳು,  ಸಿ) ಎಲೆಕ್ಟ್ರಾನಿಕ್ ಷೇರುಗಳು,  ಡಿ) ಡಿಬೆಂಚರುಗಳು

ಭಾರತಕ್ಕೆ ಯೋಜಿತ ಮಿತವ್ಯಯ (1934) ರ ರೂವಾರಿ
ಎ) ಜಾನ್ ಮಥಾಯಿ,  ಬಿ) ಎಂ.ಎನ್.ರಾಯ್,  ಸಿ) ಎಂ.ವಿಶ್ವೇಶ್ವರಯ್ಯ,  ಡಿ) ಶ್ರೀಮನ್ ನಾರಾಯಣ್

ಮಾನವನ ಬಡತನ ಸೂಚಕವನ್ನು ಅಳೆಯುವ ಮಾನದಂಡ
ಎ) ದೀರ್ಘಾಯುಷ್ಯ, ಪೋಷನೆ ಮತ್ತು ಜ್ಞಾನ,  ಬಿ) ಜ್ಞಾನ, ಅವಶ್ಯಕತೆ ಮತ್ತು ಜೀವನ ಮಟ್ಟ,  ಸಿ) ದೀರ್ಘಾಯುಷ್ಯ, ಜೀವನ ಮಟ್ಟ ಮತ್ತು ನೈರ್ಮಲ್ಯ,  ಡಿ) ದೀರ್ಘಾಯುಷ್ಯ, ಜ್ಞಾನ ಮತ್ತು ಜೀವನ ಮಟ್ಟ

ಸಂಸ್ಕಾರಿ ಅಧೀನಪ್ರದೇಶವು ಕೆಳಗಿನ ಯಾವ ವಿಸ್ತೀರ್ಣಕ್ಕಿಂತ ಹೆಚ್ಚಿನದಾಗಿದ್ದರೆ ಬಹುಪಾಲು ನೀರಾವರಿ ಯೋಜನೆಗಳೆನ್ನಬಹುದು
ಎ) 5000 ಹೆಕ್ಟೇರ್,  ಬಿ) 2000 ಹೆಕ್ಟೇರ್,  ಸಿ) 1500 ಹೆಕ್ಟೇರ್,  ಡಿ) 10000 ಹೆಕ್ಟೇರ್

ಮುಕ್ತ ವ್ಯಾಪಾರದಿಂದ ಪಕ್ಷಪಾತ ರಕ್ಷಣೆಗೆ 1923ರ ಬ್ರಿಟೀಷ್ ಇಂಡಿಯನ್  ಪಾಲಿಸಿಯ ರದ್ದುವಿಕೆಗೆ ಕಾರಣ
ಎ) ಮಾಂಟೆಗೊ-ಚೆಲ್ಮ್ಸಫೋರ್ಡ್ ಸುಧಾರಣೆ,  ಬಿ) ರಾಜ್ಯಾದಾಯ ಆಯುಕ್ತರ ಶಿಫಾರಸ್ಸು,  ಸಿ) ಸ್ವದೇಶಿ ಚಳುವಳಿ,  ಡಿ) ಅಮೇರಿಕ ವ್ಯಾಪಾರದಲ್ಲಿನ ಬದಲಾವಣೆ

ಶಕ ವರ್ಷದ ಪ್ರಕಾರ ರಾಷ್ಟ್ರೀಯ ಕ್ಯಾಲೆಂಡರಿನ ಕೊನೆಯ ತಿಂಗಳು ಯಾವುದು
ಎ) ಚೈತ್ರ,  ಬಿ) ಮಾಘ,  ಸಿ) ಶ್ರಾವಣ,  ಡಿ) ಫಾಲ್ಗುಣ

ಶಬ್ದದ ಪುನರಾವೃತ್ತಿಗೆ ಸಿಡಿ ಬಳಸುವುದು
ಎ) ಕ್ವಾರ್ಟ್ಸ್ ಹರಳು,  ಬಿ) ಟೈಟಾನಿಯಂ ಸೂಜಿ,  ಸಿ) ಲೇಸರ್ ಕಿರಣ,  ಡಿ) ಬೇರಿಯಂ ಟೈಟಾನಿಯಂ ಸೆರಾಮಿಕ್ಸ್

ವರ್ಡ್ ಪ್ರೊಸೆಸಿಂಗ್ ವ್ಯವಸ್ಥೆಗೆ ಬಳಸುವ ಸಾಧನ
ಎ) ಫ್ಲಾಪಿ ಡಿಸ್ಕ್,  ಬಿ) ಮ್ಯಾಗ್ನೆಟಿಕ್ ಕಾರ್ಡ್ ರೀಡರ್,  ಸಿ) ಸಿ.ಆರ್.ಟಿ,  ಡಿ) ಮೇಲಿನ ಎಲ್ಲವು

ಎಂ.ಎಸ್ ಡಾಸ್ ಇದು
ಎ) ಅನ್ವಯಿಕ ಸಾಫ್ಟ್ ವೇರ್,  ಬಿ) ಹಾರ್ಡ್ವೇರ್,  ಸಿ) ಸಿಸ್ಟಂ ಸಾಫ್ಟ್ವೇರ್,  ಡಿ) E.R.P.ಸಾಫ್ಟ್ ವೇರ್

ಈ ಕೆಳಗಿನವುಗಳಲ್ಲಿ ಯಾವುದನ್ನು ಯೂರೋಪಿನ ಆಟದಮೈದಾನ ಎಂದು ಕರೆಯುತ್ತಾರೆ
ಎ) ಇಟಲಿ,  ಬಿ) ಫ್ರಾನ್ಸ್,  ಸಿ) ಸ್ವಿರ್ಟರ್ಲ್ಯಾಂಡ್,  ಡಿ) ಜರ್ಮನಿ

ಕೆ.ಎಲ್.ಎಂ ರಾಯಲ್ ಏರ್ಲೈನ್ಸ್ ಸೇರಿರುವುದು
ಎ) ಇಟಲಿಗೆ,  ಬಿ) ಜಪಾನ್,  ಸಿ) ನೆದರ್ಲ್ಯಾಂಡ್,  ಡಿ) ಆಸ್ಟ್ರಿಯಾ

ಅಮಿತ್ ರೂ 30000/- ಬಂಡವಾಳದೊಂದಿಗೆ ತನ್ನ ವ್ಯವಹಾರವನ್ನು ಪ್ರಾರಂಭಿಸುತ್ತಾನೆ, ಕೆಲವು ತಿಂಗಳ ನಂತರ ರಾಹುಲ್ 20000ರೂ ಬಂಡವಾಳದೊಂದಿಗೆ ಆ ವ್ಯವಹಾರದಲ್ಲಿ ಸೇರಿಕೊಳ್ಳುತ್ತಾನೆ.  ವರ್ಷದ ಕೊನೆಯಲ್ಲಿ ಬಂದ ಲಾಭವನ್ನು 2:1ರ 
ಪ್ರಮಾಣದಲ್ಲಿ ಹಂಚಿಕೊಳ್ಳುತ್ತಾರೆ.  ಹಾಗಾದರೆ ರಾಹುಲ್ ಎಷ್ಟು ತಿಂಗಳ ನಂತರ ಈ ವ್ಯವಹಾರದಲ್ಲಿ ಸೇರಿಕೊಂಡಿರುತ್ತಾನೆ
ಎ) 2,  ಬಿ) 3,  ಸಿ) 4,  ಡಿ) 5

Knowing is every thing ಎನ್ನುವ ವಾಕ್ಯವನ್ನು ಬಳಸುವ ಕಂಪನಿಯಾವುದು
ಎ) ಬಿಬಿಸಿ ವರ್ಲ್ಡ್,  ಬಿ) ಸ್ಟಾರ್,  ಸಿ) ಸೋನಿ,  ಡಿ) ಝೀ

ಭಾರತದಲ್ಲಿ ಅತಿಹೆಚ್ಚು ಗೋಡಂಬಿ ಬೆಳೆಯುವ ರಾಜ್ಯ ಯಾವುದು
ಎ) ತಮಿಳುನಾಡು,  ಬಿ) ಅಸ್ಸಾಂ,  ಸಿ) ಕೇರಳ,  ಡಿ) ಕರ್ನಾಟಕ

ದಕ್ಷಿಣ ಕೊರಿಯಾದ ಅತಿ ದೊಡ್ಡಕಾರು ತಯಾರಿಸುವ ಸಂಸ್ಥೆಯಾವುದು
ಎ) ಹ್ಯುಂಡೈ,  ಬಿ) ಹೊಂಡ,  ಸಿ) ಸುಝುಕಿ,  ಡಿ) ಟಯೋಟ

ಸಂಸ್ಥೆಯ ಲಾಭವನ್ನು ಸಮನಾಗಿ ಹಂಚಿಕೊಳ್ಳುವ ಶೇರುದಾರರನ್ನು ಹೀಗೆ ಕರೆಯುವರು
ಎ) ಪ್ರಿಫೆರೆನ್ಸ್ ಷೇರು,  ಬಿ) ಈಕ್ವಿಟಿ ಷೇರು,  ಸಿ) ಮುಖಬೆಲೆ ಷೇರು,  ಡಿ) ಡೆಫರ್ಡ್ ಷೇರು

ಸ್ಪೀಡ್ ಎಂಬ ಉತ್ತಮ ಗುಣಮಟ್ಟದ ಪೆಟ್ರೋಲ್ ಪರಿಚಯಿಸಿದ ಪೆಟ್ರೋಲಿಯಂ ಸಂಸ್ಥೆ ಯಾವುದು
ಎ) ಭಾರತ್ ಪೆಟ್ರೋಲಿಯಂ,  ಬಿ) ಇಂಡಿಯನ್ ಆಯಿಲ್,  ಸಿ) ಹಿಂದುಸ್ತಾನ್ ಪೆಟ್ರೋಲಿಯಂ,  ಡಿ) ರಿಲಯನ್ಸ್

ಅಣುಶಕ್ತಿಯ ವಿದ್ಯುತ್ ಸ್ಥಾವರ ಕರ್ನಾಟಕದಲ್ಲಿ ಎಲ್ಲಿದೆ
ಎ) ಸಾಗರ,  ಬಿ) ಬೀದರ್,  ಸಿ) ಕೈಗಾ,  ಡಿ) ದಾಂಡೇಲಿ

ಗೌರಿಬಿದನೂರು ಪ್ರಸಿದ್ಧಿಗೆ ಬರಲು ಕಾರಣ
ಎ) ಅಣೆಕಟ್ಟು,  ಬಿ) ಸಿಸ್ಮೋಗ್ರಾಫಿಕ್ ಅಳವಡಿಕೆ,  ಸಿ) ಹೊಯ್ಸಳ ದೇವಸ್ಥಾನಗಳು,  ಡಿ) ಮಿಶ್ರಧಾತು ಸ್ಥಾವರ

ಹಟ್ಟಿ ಚಿನ್ನದ ಗಣಿ ಇರುವುದು ಎಲ್ಲಿ
ಎ) ಗುಲ್ಬರ್ಗಾ,  ಬಿ) ರಾಯಚೂರು,  ಸಿ) ಕೊಪ್ಪಳ,  ಡಿ) ಬೀದರ್

ನಿಶ್ಯಬ್ದ ಗೋಪುರ ಹೊಂದಿಕೊಂಡಿರುವುದು
ಎ) ಜೈನರಿಗೆ,  ಬಿ) ಬೌದ್ಧರಿಗೆ,  ಸಿ) ಹಿಂದುಗಳಿಗೆ,  ಡಿ) ಪಾರ್ಸಿಗಳಿಗೆ

ಐ.ಎಲ್.ಓ. ಪ್ರಧಾನ ಕಛೇರಿ ಇರುವುದು ಎಲ್ಲಿ
ಎ) ರೋಮ್,  ಬಿ) ಜಿನಿವಾ,  ಸಿ) ವಾಷಿಂಗ್ಟನ್,  ಡಿ) ನ್ಯೂಯಾರ್ಕ್

ಅರಣ್ಯ ನಾಶದಿಂದ ಕಡಿಮೆಯಾಗುವುದು
ಎ) ಮಳೆ,  ಬಿ) ಮಣ್ಣಿನ ಸವೆತ,  ಸಿ) ಸುಂಟರಗಾಳಿ,  ಡಿ) ಭೂಸವೆತ

ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸುವುದು ಈ ಅದಿರಿನಿಂದ
ಎ) ಬಾಕ್ಸೈಟ್,  ಬಿ) ಝಿಂಕ್,  ಸಿ) ಟಿನ್,  ಡಿ) ಲೆಡ್ & ಝಿಂಕ್

ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಯಿರುವುದು
ಎ) ಯಲಹಂಕ,  ಬಿ) ಕೊಲ್ಕತ್ತ,  ಸಿ) ಮುಂಬೈ,  ಡಿ) ನವದೆಹಲಿ

ಶಬ್ಧ ಅಳೆಯುವ ಪ್ರಮಾಣ ಯಾವುದು
ಎ) ನ್ಯೂಟನ್,  ಬಿ) ಜೌಲ್,  ಸಿ) ಡೆಸಿಬಲ್,  ಡಿ) ವ್ಯಾಟ್

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ 'ಮೂನ್ ಮಿಷನ್' ಯಾವುದು
ಎ) ಜಟಾಯು,  ಬಿ) ಪುಷ್ಪಕ್,  ಸಿ) ಆರ್ಯಭಟ,  ಡಿ) ಚಂದ್ರಯಾನ

ಎಜುಸ್ಯಾಟ್ ಬಗೆಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾದುದು
ಎ) ಇಸ್ರೋ ಉಡಾಯಿಸಿರುವ ಅತಿ ಭಾರದ ಉಪಗ್ರಹ ಇದಾಗಿದೆ,  ಬಿ) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಪ್ರಥಮ ಉಪಗ್ರಹ,  ಸಿ) ಜಿ.ಎಸ್.ಎಲ್.ವಿ-ಎಫ್ 01 ರಿಂದ ಇದನ್ನು ಉಡಾಯಿಸಲಾಗಿದೆ,  ಡಿ) ಎಲ್ಲವೂ ಸರಿ

ಸುನಾಮಿ ಎಂದರೆ
ಎ) ಕರಾಟೆಯ ಒಂದು ಪ್ರಕಾರ,  ಬಿ) ಹೂ ಜೋಡಣಾ ಕಲೆ,  ಸಿ) ಸಮುದ್ರದಲ್ಲಿನ ಅಬ್ಬರದ ಅಲೆ ಸರಣಿ,  ಡಿ) ಗಿಡ್ಡಗಿಡಗಳನ್ನು ಬೆಳೆಸುವ ಕಲೆ

ದೇಶದ ಮೊದಲ ಜಲವಿದ್ಯುತ್ ಸ್ಥಾವರ
ಎ) ಶಿವನ ಸಮುದ್ರ,  ಬಿ) ಜೋಗ್ ಫಾಲ್ಸ್,  ಸಿ) ಗೋಕಾಕ್ ಫಾಲ್ಸ್,  ಡಿ) ಅಬ್ಬಿ ಫಾಲ್ಸ್

GIGO ಸಂಬಂಧಿಸಿರುವುದು
ಎ) ರಾಕೆಟ್ಗಳಿಗೆ,  ಬಿ) ಆಟೊಮೊಬೈಲ್ ಗಳಿಗೆ,  ಸಿ) ಕಂಪ್ಯೂಟರ್ ಗಳಿಗೆ,  ಡಿ) ಸಂಚಾರಿ ಸಂಕೇತಗಳಿಗೆ

ಸಿಗ್ನೋಮೊನೋಮೀಟರನ್ನು ಬಳಸುವುದು
ಎ) ಹೃದಯ ಸಂಬಂಧಿ ವ್ಯಾಧಿ ಗುರುತಿಸಲು,  ಬಿ) ರಕ್ತದೊತ್ತಡ ಅಳೆಯಲು,  ಸಿ) ನಾಡಿ ಮಿಡಿತ(ಹೃದಯದ ಬಡಿತ) ತಿಳಿಯಲು,  ಡಿ) ದೇಹದಲ್ಲಿನ ಕೊಬ್ಬಿನಾಂಶ ತಿಳಿಯಲು

ಐರಾವತದಲ್ಲಿ ಪ್ರಯಾಣಿಸಿದೆ ಎಂದು ಯಾರಾದರು ಹೇಳಿದರೆ ಅವರು ಪ್ರಯಾಣಿಸಿದ್ದು
ಎ) ಹಡಗು,  ಬಿ) ವಿಮಾನ,  ಸಿ) ಬಸ್,  ಡಿ) ಆನೆ

ಕೆ.ಎಸ್.ಐ.ಸಿ ಎಂದರೆ
ಎ) ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್,  ಬಿ) ಕರ್ನಾಟಕ ಸ್ಟೀಲ್ ಅಂಡ್ ಐರನ್ ಕಾರ್ಪೊರೇಷನ್,  ಸಿ) ಕರ್ನಾಟಕ ಸ್ಟೇಟ್ ಐರನ್ ಕಂಪನಿ,  ಡಿ) ಕರ್ನಾಟಕ ಸ್ಟೇಟ್ ಇನ್ಸ್ಟಿಟ್ಯೂಟ್ ಫಾರ್ ಕಂಪ್ಯೂಟರ್ಸ್

ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ಥಿ ದೊರೆಯಲು ಕಾರಣ
ಎ) ಸಾಪೇಕ್ಷ ಸಿದ್ದಾಂತ,  ಬಿ) ಗುರುತ್ವಾಕರ್ಷಣ ನಿಯಮ,  ಸಿ) ನ್ಯೂಕ್ಲಿಯರ್ ಬಿರಿತ,  ಡಿ) ಪರಮಾಣುಗಳಿಂದ ಬೆಳಕಿನ ಚದುರುವಿಕೆ

ಯುನೈಟೆಡ್ ನೇಷನ್ಸ್ ನಲ್ಲಿ ಮಕ್ಕಳ ವಿಷಯವಾಗಿ ಇರುವ ನಿಯೋಗ ಯಾವುದು
ಎ) ಯೂನಿಸೆಫ್,  ಬಿ) ಯು.ಎನ್.ಡಿ.ಪಿ,  ಸಿ) ಯು.ಎನ್.ಎಫ್.ಪಿ.ಎ,   ಡಿ) ಯು.ಎನ್.ಈ.ಎಸ್.ಸಿ.ಓ

ರಫ್ತು ಸಾಗಣೆ ವಲಯವನ್ನು ವಿಶೇಷ ಅರ್ಥಿಕ ವಲಯವನ್ನಾಗಿ ಪರಿವರ್ತಿಸಲಾಗಿದೆ, ಈ ಕೆಳಕಂಡ ಸ್ಥಳಗಳಲ್ಲಿ ಯಾವುದು ವಿಶೇಷ ಆರ್ಥಿಕ ವಲಯವಲ್ಲ
ಎ) ನೋಯ್ಡಾ,  ಬಿ) ಸೂರತ್,  ಸಿ) ವಡೋದರ,  ಡಿ) ವಿಶಾಖಪಟ್ಟಣಂ

ಕೆಳಗಿನ ಯಾವುದು ಚಹ ಎಲೆ ಸಂಸ್ಕರಣೆಗೆ ಪ್ರಮುಖವಾದುದಲ್ಲ
ಎ) ಉರುಳುವಿಕೆ,  ಬಿ) ಒಣಗಿಸುವಿಕೆ,  ಸಿ) ಹುಳಿಯುವಿಕೆ,  ಡಿ) ಇಂಗಿಸುವಿಕೆ

ರಕ್ಷಣಾ ನಿರ್ವಹಣ ಶಿಕ್ಷಣ ಸಂಸ್ಥೆ ಎಲ್ಲಿದೆ
ಎ) ಡೆಹ್ರಾಡೂನ್,  ಬಿ) ವೆಲ್ಲಿಂಗ್ ಟನ್,  ಸಿ) ಪುಣೆ,  ಡಿ) ಸಿಕಂದರಾಬಾದ್

ಚಂಪಾರಣ್ ಸತ್ಯಾಗ್ರಹವನ್ನು ಮಹಾತ್ಮಗಾಂಧಿಯವರು ಆರಂಭಿಸಿದ ವರ್ಷ
ಎ) 1915,  ಬಿ) 1917,  ಸಿ) 1919,  ಡಿ) 1923

ಕೆಳಗಿನವುಗಳಲ್ಲಿ ಯಾವುದು ಶೌರ್ಯ ಪ್ರಶಸ್ಥಿಯಲ್ಲ
ಎ) ಅರ್ಜುನ ಪ್ರಶಸ್ಥಿ,  ಬಿ) ಅಶೋಕ ಚಕ್ರ,  ಸಿ) ಪರಮವೀರ ಚಕ್ರ,  ಡಿ) ಶೌರ್ಯ ಚಕ್ರ

ನ್ಯಾಷನಲ್ ಕೆಡೆಟ್ ಕಾರ್ಪ್ ಎಂಬುದು __________ ಸಂಸ್ಥಯಾಗಿದೆ
ಎ) ಕಾರ್ಖಾನೆ ನೌಕರರ,  ಬಿ) ಶಾಲಾ ಕಾಲೇಜಿನ ವಿದ್ಯಾರ್ಥಿಗಳ,  ಸಿ) ಕೃಷಿ ನಿರತ ರೈತರ,  ಡಿ) ವಿಶ್ವವಿದ್ಯಾಲಯ ಅಧ್ಯಾಪಕರ

ಕೆಳಗಿನವುಗಳಲ್ಲಿ ಯಾವುದು ಜೀವ ಮಂಡಲ ನಿಕ್ಷೇಪವಲ್ಲ
ಎ) ಅಗಸ್ತ್ಯಮಾಲ,  ಬಿ) ಪಂಚಮಾರ್ಹಿ,  ಸಿ) ನಲ್ಲಮಾಲ,  ಡಿ) ನೀಲಗಿರಿ

NABARD ಎಂದರೆ
ಎ) ನ್ಯಾಷನಲ್ ಬ್ಯಾಂಕ್ ಆಫ್ ಅಗ್ರಿಕಲ್ಚರಲ್ & ರೀಜನಲ್ ಡೆವಲಪ್ ಮೆಂಟ್,  ಬಿ) ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರಲ್ ಅಂಡ್ ರೂರಲ್ ಡೆವೆಲಪ್ ಮೆಂಟ್,  ಸಿ) ನ್ಯಾಷನಲ್ ಬ್ಯೂರೋ ಆಫ್ ಏರೊನಾಟಿಕಲ್ ರಿಸರ್ಚ್ ಅಂಡ್ ಡೆವೆಲಪ್ ಮೆಂಟ್,
ಡಿ) ನ್ಯಾಷನಲ್ ಅಗ್ರಿಕಲ್ಚರ್ ಬ್ಯಾಂಕ್ ಆಂಡ್ ಅಸೋಸಿಯೇಟೆಡ್ ರೂರಲ್ ಡೆವೆಲಪ್ ಮೆಂಟ್

ಬೇಡಿಕೆ ನಿಯಮದಲ್ಲಿ 'ಉಳಿದ ವಿಷಯಗಳಲ್ಲಿ ಯಾವುದೇ ಬದಲಾವಣೆಯಿಲ್ಲ' ಎಂಬ ವಾಕ್ಯದ ಅರ್ಥ
ಎ) ಬಳಕೆದಾರನ ಆದಾಯದಲ್ಲಿ ಯಾವುದೇ ವ್ಯತ್ಯಾಸ ಇರಬಾರದು,  ಬಿ) ಇತರೆ ವಸ್ತುಗಳ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಇರಬಾರದು,  ಸಿ) ಬಳಕೆದಾರನ ಅಭಿರುಚಿಯಲ್ಲಿ ಯಾವುದೇ ವ್ಯತ್ಯಾಸ ಇರಬಾರದು,  ಡಿ) ಮೇಲಿನ ಎಲ್ಲವೂ

ವರಿಷ್ಠ ಪಿಂಚಣಿ ವಿಮಾ ಯೋಜನೆಯನ್ನು ಜಾರಿಗೆ ತಂದವರು
ಎ) ನ್ಯಾಷನಲ್ ಇನ್ಶೂರೆನ್ಸ್ ಕಂಪನಿ,  ಬಿ) ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ,  ಸಿ) ಎಲ್.ಐ.ಸಿ.ಇಂಡಿಯಾ,  ಡಿ) ಓರಿಯಂಟಲ್  ಇನ್ಶೂರೆನ್ಸ್ ಕಂಪನಿ